ಅನೂಕೂಲಕರ ಕಾರ್ಯವಿಧಾನಗಳು, ಉತ್ಪನ್ನಗಳು ಮತ್ತು ಸೇವೆಗಳು ಪ್ರವೇಶಿಸುವಿಕೆಯ ಸರಾಗತೆಯನ್ನು ಹೆಚ್ಚಿಸಲು, ಸಂಪನ್ಮೂಲಗಳನ್ನು ಉಳಿಸಲು (ಉದಾ. ಸಮಯ, ಶ್ರಮ ಮತ್ತು ಅಳವು) ಮತ್ತು ಹತಾಶೆಯನ್ನು ಕಡಿಮೆಮಾಡಲು ಉದ್ದೇಶಿತವಾಗಿರುತ್ತವೆ.[೧]. ಅನುಕೂಲ ಒಂದು ತುಲನಾತ್ಮಕ ಪರಿಕಲ್ಪನೆಯಾಗಿದೆ, ಮತ್ತು ಸಂದರ್ಭವನ್ನು ಆಧರಿಸಿರುತ್ತದೆ. ಉದಾಹರಣೆಗೆ, ಮೋಟಾರು ವಾಹನಗಳನ್ನು ಒಂದು ಕಾಲದಲ್ಲಿ ಅನುಕೂಲವೆಂದು ಪರಿಗಣಿಸಲಾಗಿತ್ತು, ಆದರೆ ಇಂದು ಜೀವನದ ಸಾಮಾನ್ಯ ಭಾಗವೆಂದು ಪರಿಗಣಿಸಲ್ಪಡುತ್ತವೆ.

ಈ ಮಾರ್ಮಲೇಡ್ ಕಟರ್‍ನಂತಹ ಗೃಹೋಪಯೋಗಿ ವಸ್ತುಗಳು ಗೃಹ ಆಹಾರ ತಯಾರಿಕೆಯ ಅನುಕೂಲವನ್ನು ಹೆಚ್ಚಿಸುತ್ತವೆ

ಉದಾಹರಣೆಗಳು

ಬದಲಾಯಿಸಿ

ಸೇವಾ ಅನುಕೂಲಗಳು ಗಿರಾಕಿಗಳ ಸಮಯ ಮತ್ತು ಶ್ರಮವನ್ನು ಉಳಿಸುವಂತಹವು, ಮತ್ತು ಕ್ರೆಡಿಟ್ ಲಭ್ಯತೆ ಮತ್ತು ವಿಸ್ತೃತ ಅಂಗಡಿ ಸಮಯದಂತಹ ಬದಲಾಗುವ ಅಂಶಗಳನ್ನು ಒಳಗೊಂಡಿರುತ್ತವೆ. ಸೇವಾ ಅನುಕೂಲವು ಸರಕುಗಳು ಮತ್ತು ಸೇವೆಗಳು, ಮತ್ತು ಇವೆರಡರ ಸಂಯೋಜನೆಗಳ ಮಾರಾಟದ ಸುಗಮವಾಗಿಸುವಿಕೆಗೆ ಸಂಬಂಧಿಸಿದೆ.

ಅನುಕೂಲ ಸರಕುಗಳು ವ್ಯಾಪಕವಾಗಿ ವಿತರಿಸಲಾದ ಉತ್ಪನ್ನಗಳು ಮತ್ತು ಇವನ್ನು ಖರೀದಿಸಲು ಕನಿಷ್ಠ ಸಮಯ ಮತ್ತು ಶಾರೀರಿಕ ಹಾಗೂ ಮಾನಸಿಕ ಶ್ರಮದ ಅಗತ್ಯವಿರುತ್ತದೆ.

ಅನುಕೂಲ ಆಹಾರ ಮತ್ತು ಅನುಕೂಲ ಅಡುಗೆ ಊಟದ ತಯಾರಿಕೆಯಲ್ಲಿ ಗ್ರಾಹಕನ ಶ್ರಮವನ್ನು ಉಳಿಸಿ, ಜೊತೆಗೆ ಹೆಚ್ಚಿನ ಮಟ್ಟದ ಶಕ್ತಿ ಮತ್ತು ಗಮನಾರ್ಹ (ಬಹುತೇಕ ಕೃತಕ) ಪರಿಮಳವನ್ನು ಒದಗಿಸುತ್ತವೆ.

ತುಂಬು ಕೇಂದ್ರಗಳಲ್ಲಿನ ಅನುಕೂಲ ಉದ್ದೇಶಿತ ಅಂಗಡಿಗಳು ಪೆಟ್ರೋಲ್‍ಗೆ ಸಂಬಂಧಿಸಿರದ ವಸ್ತುಗಳನ್ನು ಮಾರಾಟ ಮಾಡುತ್ತವೆ, ಮತ್ತು ಆ ಸ್ಥಳದಲ್ಲಿ ಖರೀದಿಸುವುದು ಕಿರಾಣಿ ಅಂಗಡಿಗೆ ಮತ್ತೊಂದು ಪ್ರಯಾಣ ಮಾಡುವುದನ್ನು ಹೋಲಿಸಿದರೆ ಗ್ರಾಹಕನ ಸಮಯವನ್ನು ಉಳಿಸುತ್ತದೆ. ನೇರ ಠೇವಣಿಯಂತಹ ಅನುಕೂಲಗಳು ಕಂಪನಿಗಳ ಮತ್ತು ಗ್ರಾಹಕರ ಹಣವನ್ನು ಉಳಿಸಬಲ್ಲವು, ಆದರೆ ಇವನ್ನು ಗ್ರಾಹಕನಿಗೆ ವರ್ಗಾಯಿಸಬಹುದು ಅಥವಾ ವರ್ಗಾಯಿಸಿದಿರಬಹುದು.

ಕೆಲವು ಅನುಕೂಲಗಳು/ಸೌಕರ್ಯಗಳು ಕುಸಿದು ಬಿದ್ದಾಗ ಅಥವಾ ಸರಿಯಾಗಿ ಕಾರ್ಯ ಮಾಡದಿದ್ದಾಗ ಕಿರುಕುಳಗಳಾಗಬಲ್ಲವು. ಕುಸಿದು ಬಿದ್ದಾಗ ಅನುಕೂಲದ ವಸ್ತುಗಳನ್ನು ದುರಸ್ತಿ ಮಾಡುವುದು ಸಮಯ ಮತ್ತು ಹಣ ಎರಡನ್ನೂ ತೆಗೆದುಕೊಳ್ಳುತ್ತದೆ, ಮತ್ತು ಅವುಗಳನ್ನು ಅವಲಂಬಿಸಿರುವ ಬೇರೆ ಏನಾದರೂ ಆಗದಿದ್ದಾಗ ಬಹಳ ಹೆಚ್ಚು ವೆಚ್ಚಗಳನ್ನು ಉಂಟುಮಾಡಬಹುದು.

ಉಲ್ಲೇಖಗಳು

ಬದಲಾಯಿಸಿ
🔥 Top keywords: ಫ.ಗು.ಹಳಕಟ್ಟಿಕುವೆಂಪುವಿಶೇಷ:Searchಫ. ಗು. ಹಳಕಟ್ಟಿಸಹಾಯ:ಲಿಪ್ಯಂತರಮುಖ್ಯ ಪುಟಬಸವೇಶ್ವರಮೊದಲನೆಯ ಕೆಂಪೇಗೌಡಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡಜಿ.ಎಸ್.ಶಿವರುದ್ರಪ್ಪಶಿವರಾಮ ಕಾರಂತಕನ್ನಡ ಅಕ್ಷರಮಾಲೆಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ವಚನ ಸಾಹಿತ್ಯಗೋವಿಂದ ಪೈಎ.ಪಿ.ಜೆ.ಅಬ್ದುಲ್ ಕಲಾಂಭೀಷ್ಮಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕವಿನಾಯಕ ಕೃಷ್ಣ ಗೋಕಾಕಕನ್ನಡ ಸಂಧಿಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿಗಿರೀಶ್ ಕಾರ್ನಾಡ್ವಚನಕಾರರ ಅಂಕಿತ ನಾಮಗಳುಹಂಪೆಭಾರತೀಯ ಮೂಲಭೂತ ಹಕ್ಕುಗಳುಹೊಯ್ಸಳಕನಕದಾಸರು