ಅಮರಾವತಿ (ಆಂಧ್ರ ಪ್ರದೇಶ)

ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಸತ್ಯನಾರಾಯಣ ದೇವಾಲಯ
ಈ ಲೇಖನವು ಐತಿಹಾಸಿಕ ಪಟ್ಟಣದ್ದಾಗಿದೆ. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.

ಅಮರಾವತಿ' (ಆಂಧ್ರ ಪ್ರದೇಶ) ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಇದು ಕೃಷ್ಣಾನದಿಯ ದಡದಲ್ಲಿ,ಗುಂಟೂರು ಜಿಲ್ಲೆಯಲ್ಲಿದೆ. ಈ ಪಟ್ಟಣದ ಉತ್ತರದಲ್ಲಿರುವ ಧರಣಿಕೋಟ ಎಂಬ ಸ್ಥಳವು ಆಂಧ್ರದಲ್ಲಿ ಬೌದ್ಧರ ರಾಜಧಾನಿಯಾಗಿತ್ತು. ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ ಸ್ತೂಪವು ದೊರೆತಿದೆ. ಇಲ್ಲಿರುವ ಅಮೃತೇಶ್ವರ ಗುಡಿಯು ಬಹು ಪ್ರಸಿದ್ಧವಾಗಿದೆ. ಈ ಪಟ್ಟಣವು ಶಾತವಾಹನರ ರಾಜಧಾನಿಯೂ ಆಗಿತ್ತು.

Amaravati
అమరావతి
ಅಮರಾವತಿ
ಧರಣಿಕೋಟ, ಧನ್ಯಕಟಕ, ಆಂಧ್ರನಗರಿ
ಐತಿಹಾಸಿಕ ಪಟ್ಟಣ
ಅಮರಾವತಿಯ ಮಹಾ ಸ್ತೂಪ
ಅಮರಾವತಿಯ ಮಹಾ ಸ್ತೂಪ
ದೇಶ ಭಾರತ
ರಾಜ್ಯಆಂಧ್ರಪ್ರದೇಶ
ಜಿಲ್ಲೆಗುಂಟೂರು
Elevation
೮ m (೨೬ ft)
Population
 (೨೦೦೯)
 • Total೫೪೯೩೭೦
ಭಾಷೆಗಳು
 • ಅಧಿಕೃತತೆಲುಗು
Time zoneUTC+5:30 (IST)
Telephone code೨೫೪
Vehicle registrationAP 7
ಆಂಧ್ರಪ್ರದೇಶದ ಪವಿತ್ರ ಸ್ಮಾರಕಗಳ ನಕ್ಷೆ

ಇತಿಹಾಸ

ಬದಲಾಯಿಸಿ

ಈ ಸ್ಥಳವು ಸ್ಕಂದ ಪುರಾಣದಲ್ಲಿಯೂ ಉಲ್ಲೇಖವನ್ನು ಹೊಂದಿದೆ. ಬೌದ್ಧರ ವಜ್ರಾಯನ ಶಾಖೆಯ ಪ್ರಕಾರ ಗೌತಮ ಬುದ್ಧ ಇಲ್ಲಿ ಅಂದರೆ ಧರಣಿಕೋಟದಲ್ಲಿ ಉಪದೇಶವನ್ನು ನೀಡಿದ. ಇದರ ಅನ್ವಯ ಇಲ್ಲಿನ ಇತಿಹಾಸವು ಕ್ರಿಸ್ತಪೂರ್ವ ೫೦೦ ರಿಂದಲೇ ಪ್ರಾರಂಭವಾಗುತ್ತದೆ. ಲಿಖಿತ ಉಲ್ಲೇಖಗಳ ಪ್ರಕಾರ ಈ ಪ್ರದೇಶವು ಶಾತವಾಹನರಿಂದ ಆಳಲ್ಪಟ್ಟಿತ್ತು. ಮುಂದೆ ಪಲ್ಲವರು, ಪೂರ್ವ ಚಾಲುಕ್ಯರು, ತೆಲುಗು ಚೋಳರು ಈ ಪ್ರದೇಶದ ಆಧಿಪತ್ಯ ಹೊಂದಿದ್ದರು. ಸುಮಾರು ೧೧ ನೆಯ ಶತಮಾನದಲ್ಲಿ ಈ ಪ್ರದೇಶವು ಕಾಕತೀಯರಿಂದ ಆಳಲ್ಪಟ್ಟು ಮುಂದೆ ವಿಶಾಲ ಆಂಧ್ರದಲ್ಲಿ ವಿಲೀನವಾಯಿತು.

ಕ್ರಿಸ್ತಪೂರ್ವ ೫೦೦ ನೆಯ ಸುಮಾರು ಇಲ್ಲಿ ಬೌದ್ಧಧರ್ಮವು ಪ್ರವರ್ಧಮಾನವಾಗಿತ್ತು. ಇಲ್ಲಿ ದೊರೆತ, ಅಶೋಕ ನಿರ್ಮಿಸಿದ ಸುಂದರ ಸ್ತೂಪವು ಇದಕ್ಕೆ ಸಾಕ್ಷಿಯಾಗಿದೆ. ಇದರ ಫಲಕಗಳಲ್ಲಿ ಗೌತಮಬುದ್ಧನ ಕತೆಯನ್ನು ಕೆತ್ತಲಾಗಿದೆ. ಕ್ರಿಸ್ತಪೂರ್ವ ೨ ನೆಯ ಶತಮಾನದಿಂದ ಕ್ರಿಸ್ತಶಕ ೨ ನೆಯ ಶತಮಾನದವರೆಗೆ ಶಾತವಾಹನರು ಈ ಧರಣಿಕೋಟವನ್ನು ರಾಜಧಾನಿಯನ್ನಾಗಿಸಿಕೊಂಡರು. ಅನಂತರ ಬೌದ್ಧಧರ್ಮವು ಕ್ಷೀಣಗೊಂಡು ಹಿಂದೂಧರ್ಮವು ಪ್ರಬಲವಾದನಂತರ ಈ ಸ್ಥಳವು ಅವಗಣನೆಗೆ ತುತ್ತಾಯಿತು. ಈ ಸ್ಥಳಗಳಲ್ಲಿ ದೊರೆತ ಹಲವಾರು ಚಿತ್ರಿಕೆಗಳು, ವಸ್ತುಗಳು ಚೆನ್ನೈ ಮತ್ತು ಲಂಡನ್ ವಸ್ತುಸಂಗ್ರಹಾಲಯಗಳಲ್ಲಿ ರಕ್ಷಿಸಲ್ಪಟ್ಟಿವೆ.

ಛಾಯಾಂಕಣ

ಬದಲಾಯಿಸಿ
🔥 Top keywords: ಫ.ಗು.ಹಳಕಟ್ಟಿಕುವೆಂಪುವಿಶೇಷ:Searchಫ. ಗು. ಹಳಕಟ್ಟಿಸಹಾಯ:ಲಿಪ್ಯಂತರಮುಖ್ಯ ಪುಟಬಸವೇಶ್ವರಮೊದಲನೆಯ ಕೆಂಪೇಗೌಡಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡಜಿ.ಎಸ್.ಶಿವರುದ್ರಪ್ಪಶಿವರಾಮ ಕಾರಂತಕನ್ನಡ ಅಕ್ಷರಮಾಲೆಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ವಚನ ಸಾಹಿತ್ಯಗೋವಿಂದ ಪೈಎ.ಪಿ.ಜೆ.ಅಬ್ದುಲ್ ಕಲಾಂಭೀಷ್ಮಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕವಿನಾಯಕ ಕೃಷ್ಣ ಗೋಕಾಕಕನ್ನಡ ಸಂಧಿಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿಗಿರೀಶ್ ಕಾರ್ನಾಡ್ವಚನಕಾರರ ಅಂಕಿತ ನಾಮಗಳುಹಂಪೆಭಾರತೀಯ ಮೂಲಭೂತ ಹಕ್ಕುಗಳುಹೊಯ್ಸಳಕನಕದಾಸರು